ಕ ಸ ದ ವಿ ಷ ಚ ಕ್ರ ದೊ ಳ ಗೆ...

ಉದ್ಯಾನ ನಗರಿಯಲ್ಲಿ ಎಲ್ಲಿ ಹೋದರೂ ದುರ್ನಾತ! ಕೊಳೆತು ನಾರುವ ಕಸದ ರಾಶಿಗಳನ್ನು ಕಂಡು ಜನ ಹೌಹಾರಿದರೆ, ಅದನ್ನು ತುಂಬಿಕೊಂಡು ಅಲ್ಲಲ್ಲಿ ಸಾಲುಗಟ್ಟಿ ನಿಂತಿರುವ ಲಾರಿಗಳು... ಬೆಂಗಳೂರಿಗರು ಪ್ರತಿದಿನ ಸೃಷ್ಟಿಸುತ್ತಿರುವ ೪೦೦೦ ಮೆಟ್ರಿಕ್ ಟನ್ ಕಸವನ್ನು ಉಸಿರು ಬಿಗಿಹಿಡಿದು ಸುರಿಸಿಕೊಳ್ಳುತ್ತಿದ್ದ ಸುತ್ತಮುತ್ತಲ ಹಳ್ಳಿಯ ಜನರು ಬಂಡಾಯವೆದ್ದಿದ್ದರ ಪರಿಣಾಮವಿದು. ಈ ಬಿಕ್ಕಟ್ಟಿನಿಂದ ದಿಕ್ಕೆಟ್ಟಿರುವ ರಾಜಧಾನಿಯ ಪರಿಸ್ಥಿತಿ, ಅದಕ್ಕೆ ಕಾರಣವಾಗಿರುವ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನ ಮತ್ತು ಪರಿಹಾರದ ಮಾರ್ಗೋಪಾಯಗಳನ್ನು ತಲಸ್ಪರ್ಶಿಯಾಗಿ ಅವಲೋಕಿಸಿದ್ದಾರೆ
ಇದು ಇನ್ನು ನಡೆಯದು!

ಅಮೆರಿಕದ ರಾಜಕೀಯ ಯಾವಾಗಲೂ ಅಷ್ಟೊಂದು ರೋಚಕವಾಗಿರುವುದಿಲ್ಲ. ಆದರೆ, ಶ್ವೇತಭವನದಲ್ಲಿ ಅಧ್ಯಕ್ಷರಾಗಿ ಯಾರು ವಿರಾಜಮಾನರಾಗುತ್ತಾರೆ ಎಂಬ ವಿಷಯಕ್ಕೆ ಬಂದರೆ ಅಮೆರಿಕದ ರಾಜಕೀಯದಲ್ಲಿ ದಿಢೀರನೆ ರೋಚಕತೆ ಬಂದುಬಿಡುತ್ತದೆ! ಈಗ ಎದುರಾಗಿರುವ ೪೫ನೇ ಅಧ್ಯಕ್ಷ ಆಯ್ಕೆಯ ಚುನಾವಣೆಯೂ ಅದಕ್ಕೆ ಹೊರತಲ್ಲ.
ಭಗ್ನಗೊಂಡ ಕನಸುಗಳು

ನೆಹರೂ ರಾಮಲೀಲಾ ಮೈದಾನದಲ್ಲಿ ಕಾರ್ಯಕ್ರಮವೊಂದನ್ನು ವೀಕ್ಷಿಸುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತ್ತು. ಅದನ್ನು ಕಂಡ ಹರೀಶ್, ಹಿಂದೆ ಮುಂದೆ ನೋಡದೆ ಕರೆಂಟು ಕಂಬವೊಂದನ್ನು ಹತ್ತಿ ಧಗಧಗನೆ ಉರಿಯುತ್ತಿದ್ದ ಶಾಮಿಯಾನಾವನ್ನು ಹರಿದು ಹಾಕಿದ್ದರು. ದೇಶದ ಮೊತ್ತ ಮೊದಲ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು. ಆ ಪ್ರಶಸ್ತಿ ತಮ್ಮ ವೃತ್ತಿ ಬದುಕಿಗೆ ಒಳ್ಳೆಯ ದಾರಿ ಮಾಡುತ್ತದೆ ಎಂದು ನಂಬಿದ್ದರು ಹರೀಶ್. ಆದರೆ ಅವರ ಕನಸು ನನಸಾಗಲಿಲ್ಲ.
ಹರೆಯದ ಲೆಕ್ಕಾಚಾರ - ಅನಿಸಿದ್ದನ್ನು ಮಾಡುತ್ತಾ ಮುಂದುವರಿ

೨೦೧೨ರ ಟಿಎಸ್ಐ- ಐಸಿಎಂಆರ್ ಲೈಂಗಿಕ ಸಮೀಕ್ಷೆ ಹೊರಗೆಡವಿರುವ ಸತ್ಯಾಂಶವೇನೆಂದರೆ ಭಾರತದ ನಗರಗಳ ಅರ್ಧದಷ್ಟು ಹದಿಹರೆಯದವರು (ಶೇಕಡ ೬೨ರಷ್ಟು) ೨೦ನೇ ವಯಸ್ಸಿಗೆ ತಲುಪುವುದರೊಳಗೆ ತಮ್ಮ ಕನ್ಯತ್ವ/ ಕುವರತ್ವವನ್ನು ಕಳೆದುಕೊಂಡಿರುತ್ತಾರೆ. ಶೇಕಡಾ ೩೧ರಷ್ಟು ಪ್ರತಿಸ್ಪಂದಿಗಳು ಮಾತ್ರ ತಾವು ೨೧ನೇ ವಯಸ್ಸು ದಾಟಿದ ಮೇಲೆಯೇ ಲೈಂಗಿಕ ಅನುಭವ ಪಡೆದಿದ್ದಾಗಿ ಹೇಳಿದ್ದಾರೆ. ನಮ್ಮ ಸಮೀಕ್ಷೆಯ ಪ್ರತಿಸ್ಪಂದಿಗಳಲ್ಲಿ ತಮಗಿನ್ನೂ ಲೈಂಗಿಕ ಅನುಭವವೇ ಆಗಿಲ್ಲ ಎಂದು ಹೇಳಿದವರು ಯಾರೂ ಇಲ್ಲ ಎನ್ನುವುದೇ ಅಚ್ಚರಿಯ ವಿಷಯ!
ರಿಯಾಲಿಟಿ!

ಗಿರಿಜನರ ಸ್ವಾಭಾವಿಕ ಬದುಕನ್ನು ಮನೋರಂಜನೆಯನ್ನಾಗಿ ಅಣಕಿಸಿದ ’ಹಳ್ಳಿ ಹೈದ ಪ್ಯಾಟೇಗ್ ಬಂದ’ ರಿಯಾಲಿಟಿ ಶೊ ಮತ್ತು ಗಾಂಧಿನಗರದ ಬಣ್ಣದ ಬದುಕು ಮುಗ್ದ ಯುವಕನೊಬ್ಬನ ಬದುಕನ್ನು ಛಿದ್ರಗೊಳಿಸಿ ಹುಚ್ಚಾಸ್ಪತ್ರೆ ಸೇರಿಸಿದ ದಾರುಣ ಕತೆಯನ್ನು ಮತ್ತು ಕಾಡಿನ ನಿಷ್ಕಲ್ಮಶ ಬದುಕನ್ನು ಅರ್ಥಮಾಡಿಕೊಳ್ಳಲಾಗದ ‘ನಾಗರಿಕ’ ಮನಸ್ಥಿಯನ್ನು ಬಿಚ್ಚಿಟ್ಟಿದ್ದಾರೆ
ಬ್ಲಾಗ್

ಅಸಹಿಷ್ಣು ಮತ್ತು ಅಪ್ರಸ್ತುತ ಸರ್ಕಾರಗಳ ಕರಾಳ ರಾಜದ್ರೋಹ ಕಾನೂನು
ಕೇಂದ್ರ ಸರ್ಕಾರವು ದಿನೇ ದಿನೇ ತಮಾಷೆಯ ವಸ್ತುವಾಗುತ್ತಿದೆ ಎನ್ನದೆ ವಿಧಿಯಿಲ್ಲ. ಈಗ ನನಗೆ ಪ್ರಿಯವಾದ ಇಕನಾಮಿಸ್ಟ್ ಪತ್ರಿಕೆಯು ರಾಹುಲ್ ಗಾಂಧಿಯವರ ಅಪ್ರಸ್ತುತತೆಯ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದೆ. ಈ ಲೇಖನದಲ್ಲಿ ಪತ್ರಿಕೆ ರಾಹುಲ್ ಗಾಂಧಿ ಅವರು ದೇಶದ ಉನ್ನತ ಸ್ಥಾನಕ್ಕೆ ಯೋಗ್ಯವಲ್ಲದ ವ್ಯಕ್ತಿ ಎನ್ನುವಂತೆ ಬಿಂಬಿಸಿದೆ. ಅದಕ್ಕೆ ಬಹಳ ಟೀಕೆ- ಟಿಪ್ಪಣಿಗಳೂ ಪ್ರಕಟವಾಗಿದೆ. ಕಾಂಗ್ರೆಸ್ ಈ ಬಗ್ಗೆ ವಿರೋಧವನ್ನೂ ವ್ಯಕ್ತಪಡಿಸಿದೆ. ಅದಕ್ಕೂ ಮೊದಲು ಟೈಮ್ ಪತ್ರಿಕೆಯು ನಮ್ಮ ಪ್ರಧಾನಮಂತ್ರಿಯವರನ್ನು ಅಲ್ಪಸಾಧಕ ಎಂದು ಬಣ್ಣಿಸಿತ್ತು. ಈ ಟೀಕೆಗೆ ಭಾರತದಲ್ಲಿ ಕಟು ವಿರೋಧ ವ್ಯಕ್ತವಾಗಿತ್ತು.
ಅರಿಂದಮ್ ಚೌಧುರಿ

ಕ್ರೀಡಾ ಸಮರ
ನಿಮ್ಮನ್ನು ನಾನು ರೋಮ್ನ ಆ ಹಳೇ ಕಾಲದ ರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತೇನೆ. ಆಗಿನ ಮಾರುಕಟ್ಟೆಗಳನ್ನು ಕಲ್ಪಿಸಿ ನೋಡಿ. ಗಡಿಬಿಡಿ ಮತ್ತು ಕಿಕ್ಕಿರಿದ ಜನಸಂದಣಿ, ಹಾದಿಯುದ್ದಕ್ಕೂ ಪರದೆಗಳು, ಶೀಟ್ಗಳ ಅಡಿಯಲ್ಲಿ ತೆರೆದಿಟ್ಟ ವಸ್ತುಗಳು, ತ್ರೇಸ್ನಿಂದ ಟೈಬರ್ವರೆಗೆ ಆ ಋತುವಿನಲ್ಲಿ ಏನು ತಯಾರಾಗಿದೆಯೋ, ಹಣ್ಣುಗಳು, ಹುಲ್ಲುಗಳು ಹಾಗೂ ಮಣ್ಣಿನ ಮಡಿಕೆಗಳೆಲ್ಲವೂ ಅಲ್ಲಿರುತ್ತಿದ್ದವು. ಹಾಗೇ ಹಾದಿಯಲ್ಲಿ ಮುಂದೆ ಹೋದಲ್ಲಿ ನಿಮಗೆ ಮಾರುಕಟ್ಟೆಯ ಕೇಂದ್ರ ಭಾಗ ಸಿಗುತ್ತದೆ. ಅದರ ಹೃದಯ ಭಾಗದಲ್ಲಿ ಶೀತಲವಾದ ಕಾರಂಜಿಯಿದೆ.
ಪ್ರಶಾಂತೊ ಬ್ಯಾನರ್ಜಿ

ಮುಳ್ಳಿನ ಮಡಿಲಲ್ಲಿ ಬಸವಳಿದಿದೆ ತಾಜ್ ಮಹಲ್
ನಾವು ಮೊದಲೇ ದೂರದ ಕರ್ನಾಟಕದ ಹುಬ್ಬಳ್ಳಿಯವರು, ನಮ್ಮ ಬಿಜಾಪುರದ ಸೊಬಗನ್ನು ಕಂಡು ಕಟಕ ರೊಟ್ಟಿ ಶೆಂಗಾ ಚೆಟ್ನಿ ಉಂಡವರು.
ರಾಘವೇಂದ್ರ ಗುಡಿ

ಮತ್ತೆ ಕಾಡಿದ ರಶೋಮನ್
ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ. ಕೊರೊಸಾವಾನ ಎಲ್ಲಾ ಸಿನಿಮಾಗಳಲ್ಲಿ ಬಹಳ ಸಲ ಮತ್ತೆ ಮತ್ತೆ ಕಾಡುವುದು ರಷೊಮನ್. ಯಾಕೆಂದರೆ ಮನುಷ್ಯನ ಸ್ವಾರ್ಥ ಮತ್ತು ಆಲೋಚನೆಯ ಮಿತಿಗಳನ್ನು ಆ ಸಿನೆಮಾದ ಕತೆ ಅನಾವರಣ ಮಾಡುವಷ್ಟು ಅದ್ಭುತವಾಗಿ ಬೇರೆ ಯಾವುದೂ ಮಾಡಲು ಅಸಾಧ್ಯವೆಂದು ನನ್ನ ಭಾವನೆ.
ಹರ್ಷಕುಮಾರ್ ಕುಗ್ವೆ