User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು

ಸುಧೀರ್‌ರಾಜ್ ಅತ್ತಾವರ್ : ರಂಗಕರ್ಮಿ ಹಾಗೂ ಚಿತ್ರ ಸಾಹಿತಿ

 

ನಿಮ್ಮ ಅನುಭವಗಳನ್ನೇ ಚಿತ್ರ ಸಾಹಿತ್ಯದಲ್ಲಿ ಒಡಮೂಡಿಸಲು ಯತ್ನಿಸಿದ್ದೀರಾ?

ಹೌದು. ನಾನು ಅಪ್ಪ- ಅಮ್ಮನನ್ನು ಕಳೆದುಕೊಂಡಾಗ ಬದುಕಿನ ಸಂಬಂಧಗಳೆಲ್ಲಾ ದೂರವಾದಂತೆ ಅನಿಸಿತು. ಆ ಒಂಟಿತನ, ದುಃಖವೇ ಸವಾರಿ ಚಿತ್ರದ ’ಬಿಸಿಲು ತಾಗಿ, ಮಂಜು ಕರಗಿ..’ ಹಾಡಿನಲ್ಲಿ ಹೊರಹೊಮ್ಮಿದೆ.

ನಿಮ್ಮೊಳಗಿನ ’ಚಿತ್ರ ಸಾಹಿತಿ’ಗೆ ಪ್ರೇರಣೆ..?

ಜಿ.ಎಸ್. ಶಿವರುದ್ರಪ್ಪ, ಕೆ.ಎಸ್. ನರಸಿಂಹಸ್ವಾಮಿ, ಜಯಂತ ಕಾಯ್ಕಿಣಿ ಅವರ ಗೀತೆಗಳು.

ಪ್ರಸ್ತುತ ಕನ್ನಡ ಚಿತ್ರಗೀತೆಗಳ ಕುರಿತು...

ಸಂಗೀತ ಮತ್ತು ಸಾಹಿತ್ಯ ಗಂಡ-ಹೆಂಡತಿ ಇದ್ದಂತೆ. ಎರಡಕ್ಕೂ ತಾಳ-ಮೇಳ ಇರಬೇಕು. ಸುಮ್ಮನೆ ಪ್ರಾಸ ಬರೆಯುವ ಬದಲು ಜನರ ಮನಮುಟ್ಟುವಂತೆ ಬರಬೇಕಿದೆ.

ರಂಗಭೂಮಿ ತೊರೆದು ಸಂಪೂರ್ಣ ಚಿತ್ರರಂಗದಲ್ಲೇ ತೊಡಗಿಸಿಕೊಳ್ಳುವಿರಾ?

ಖಂಡಿತಾ ಇಲ್ಲ, ರಂಗಭೂಮಿ ನನ್ನ ತವರು. ಅಲ್ಲಿ ಖುಷಿ, ನೆಮ್ಮದಿ ಇದೆ. ಆದರೆ, ’ಹೊಟ್ಟೆಪಾಡಿನ ಖುಷಿ’ಗೆ ಚಿತ್ರರಂಗ.

ಹೊಸ ಚಿತ್ರಗಳು?

’ಇಜ್ಜೋಡು’, ’ಜಸ್ಟ್ ಮಾತಾಡು ಮಾತಾಡು’, ’ಲಹರಿ’, ’ಮರಳಿ ಮರೆಯಾಗಿ’ ಚಿತ್ರಗಳಿಗೆ ಹಾಡು ಬರೆಯುತ್ತಿದ್ದೇನೆ. ಜೊತೆಗೆ ನನ್ನ ನಿರ್ದೇಶನದ ’ಮಡಿ’ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಟಿಎಸ್‌ಐ

ಚಿತ್ರಾ ಕರ್ಕೇರಾ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .