ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮರೆಯಲಿ ಹ್ಯಾಂಗ?
ಭೋಪಾಲ್ ದುರಂತದ ವಿಷತ್ಯಾಜ್ಯಗಳು ಇನ್ನೂ ಉಳಿದಿದ್ದು, ನಗರವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ.
 
 

ಏಕೆ?

1984ರಲ್ಲಿ ಭೋಪಾಲ್ ನಗರದ `ಯೂನಿಯನ್ ಕಾರ್ಬೈಡ್` ಕಾರ್ಖಾನೆಯಲ್ಲಿ ದೊಡ್ಡ ಮಟ್ಟದ ಅನಿಲ ದುರಂತ ಸಂಭವಿಸಿತು. ಮೀಥೈಲ್ ಐಸೋ ಸಯನೈಡ್ ಅನಿಲ ಸೋರಿಕೆಯಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಈ ದುರಂತ ನಡೆದು ೨೪ ವರ್ಷಗಳೇ ಕಳೆದಿದ್ದರೂ ಇನ್ನೂ ವಿಷತ್ಯಾಜ್ಯಗಳು ಸ್ಥಳದಲ್ಲೇ ಇದ್ದು ಇವುಗಳ ಪ್ರಮಾಣ ೩೭೬ ಟನ್‌ಗಳಷ್ಟಿವೆ. ಪರಿಣಾಮವಾಗಿ ಈಗಲೂ ಹಲವಾರು ಜನರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇದರ ಜೊತೆಗೆ ೮೦೦೦ ಟನ್ ತ್ಯಾಜ್ಯ ಭೂಮಿಯ ಅಡಿಭಾಗದಲ್ಲಿದ್ದು ಇದು ಆ ಪ್ರದೇಶದ ಅಂತರ್ಜಲವನ್ನು ಮಲಿನಗೊಳಿಸುತ್ತಿದೆ. `ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ` ಇತ್ತೀಚೆಗೆ ವಿಷತ್ಯಾಜ್ಯ ಸ್ವೀಕರಿಸುವುದಿಲ್ಲ ಎಂಬುದಾಗಿ ಹೇಳಿದೆ. ಹಲವು ಸರ್ಕಾರೇತರ ಸಂಘಟನೆಗಳು ದುರಂತಕ್ಕೆ ಬಲಿಯಾದವರ ಸಲುವಾಗಿ ಹೋರಾಡುತ್ತಿದ್ದು, `ಡೌ ಕೆಮಿಕಲ್ಸ್` (`ಯೂನಿಯನ್ ಕಾರ್ಬೈಡ್` ಕಾರ್ಖಾನೆ ಪಡೆದಿರುವ) ವಿಷತ್ಯಾಜ್ಯಗಳನ್ನು ತೆಗೆದುಹಾಕಬೇಕು ಎಂದು ಹೇಳಿದೆ. ಹಲವು ಸರ್ಕಾರೇತರ ಸಂಸ್ಥೆಗಳು ಹಿಂದೆ ಇದೇ ವಿಚಾರವನ್ನು ಎತ್ತಿದ್ದರೂ ಸರ್ಕಾರ ಈ ಕುರಿತು ದೃಷ್ಟಿ ಹರಿಸಿಯೇ ಇಲ್ಲ.

ಈಗಿನ ಅಗತ್ಯವೇನು?

ವಿಷತ್ಯಾಜ್ಯವನ್ನು ನಾಶಮಾಡಲು ಸರ್ಕಾರ ಸಮರ್ಪಕ ಕ್ರಮ ಕೈಗೊಳ್ಳಬೇಕು

 ಟಿಎಸ್‌ಐ

ವಿಕಾಸ್ ಕುಮಾರ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .