|

ರಂಗಭೂಮಿಯೆಡೆಗೆ ಒಲವು ಮೂಡಲು ಕಾರಣ ?
ಪ್ರೀತಿ ಹೇಗೆ ಹುಟ್ಟುತ್ತದೆ ಎನ್ನಲು ಸಾಧ್ಯವಿಲ್ಲವೋ ಹಾಗೆ ರಂಗದೆಡೆಗೆ
ಒಲವು ಹೇಗೆ ಬೆಳೆಯಿತು ಎನ್ನುವುದೂ ಕಷ್ಟ .
ರಂಗಭೂಮಿ ಎಡೆಗೆ ಸೆಳೆತ ಇತ್ತು.
ಇಲ್ಲಿಗೆ ಬಂದೆ.
ಕ್ಯಾಮರಾ ಹಿಂದೆ ನಿಲ್ಲಲು ಪ್ರೇರಣೆ ?
ಇನ್ನೊಬ್ಬರ ಕೈಗೊಂಬೆ ಆಗುವುದರ ಬದಲು ನಾನೇ ಸ್ವತಃ ಏನಾದರೂ ಮಾಡಬೇಕೆಂದು
ಅನಿಸಿದ್ದೇ ಕ್ಯಾಮರಾ ಹಿಂದೆ ನಿಲ್ಲಲು ಕಾರಣ .
ಈ ಕ್ಷೇತ್ರದ ಹಿರಿಯರೊಂದಿಗೆ ಕೆಲಸ ಮಾಡಿದ ಅನುಭವ ?
ಇಲ್ಲಿ ಹಿರಿತನ ಎಂಬುದೇ ಇಲ್ಲ .
ವೈಚಾರಿಕ ಸ್ಪಷ್ಟತೆ,
ಬದ್ಧತೆ,
ಕರ್ತವ್ಯ ಪ್ರಜ್ಞೆಗಳು ಈ ಕ್ಷೇತ್ರದಲ್ಲಿ ಕೆಲಸ
ಮಾಡುತ್ತವೆ.
ನೀವು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೀರಿ .
ಹಾಗಿದ್ದಲ್ಲಿ ಮೂಲತಃ ನೀವೇನು?
ಮೂಲತಃ ನಾನೊಬ್ಬ ಮಾನವ .
ಮಾನವೀಯತೆ ಎಡೆಗೆ ಒಲವಿದೆ.
ಆದರೆ ಯಾವುದು ತೃಪ್ತಿ ನೀಡುತ್ತದೋ ಅಲ್ಲಿ
ದುಡಿಯಬಯಸುತ್ತೇನೆ.
ಪೂರ್ಣಪ್ರಮಾಣದ ನಿರ್ದೇಶನದಲ್ಲಿ ತೊಡಗುವ ಯೋಚನೆ ಇದೆಯೇ ?
ಇಂತಹುದ್ದನ್ನೇ ಮಾಡಬೇಕು ಎಂಬ ಯೋಚನೆ ಏನಿಲ್ಲ .
ಯಾವ ಕಾರ್ಯದಲ್ಲಿ ತೊಡಗಿದರೂ ನಮ್ಮನ್ನು ನಾವು
ಸಂಪೂರ್ಣ ತೊಡಗಿಸಿಕೊಳ್ಳುವುದು ಮುಖ್ಯ ಅಷ್ಟೆ.
ನಿಮ್ಮ ಕುಟುಂಬದ ಬಗ್ಗೆ ?
ನಾನು ವಿಶ್ವಮಾನವ !
ಟಿಎಸ್ಐ
ಡಿ.ಎಸ್. ಶ್ರೀಕಲಾ
|