'ರೋಚಕ ಮಾವೋವಾದಿ ಲೋಕ' (ಸಂಜಯ್ ಬಾಸಕ್ ಮತ್ತು ರಂಜನ್ ಬಸು) ಮುಖಪುಟ ಲೇಖನ ಚೆನ್ನಾಗಿತ್ತು. ವ್ಯಾಪಕ ಪರಿಶೋಧನೆ ನಡೆಸಿ ವಾಸ್ತವವನ್ನು ರೋಚಕವಾಗಿ ಪರಿಚಯಿಸಿದ್ದು ಶ್ಲಾಘನೀಯ. ಮಾವೋವಾದಿಗಳು ತಮ್ಮ ತಾತ್ವಿಕ ಮೂಲ ಧೋರಣೆಯನ್ನು ಬಚ್ಚಿಟ್ಟು, ಹಿಂಸಾ ಮಾರ್ಗ ಅನುಸರಿಸುವ ಅಗತ್ಯ ನನಗಂತೂ ಕಂಡು ಬರುತ್ತಿಲ್ಲ. ಸರ್ಕಾರಗಳು ಇಂತಹ ಅಡಗುದಾಣಗಳಿಗೆ ಆಸ್ಪದವೀಯದಂತೆ ನೋಡಿಕೊಂಡರೆ ಅರಣ್ಯವಾಸಿ ಬುಡಕಟ್ಟು ಜನಾಂಗಗಳು ಹಾಗೂ ಅವರ ಸಂಘಟನೆಗಳು ಸಮಾಜದಿಂದ ದೂರವುಳಿಯಲು ಸಾಧ್ಯವಿಲ್ಲ ಎನ್ನಬಹುದು. ಅಂತಹ ಅಡಗುದಾಣಗಳಿಗೆ ಆಸ್ಪದ ನೀಡಿದ್ದರಿಂದಲೇ ವೀರಪ್ಪನ್ ಪ್ರಸಿದ್ಧ ಕಾಡುಗಳ್ಳನೆಂಬ ಖ್ಯಾತಿ ಪಡೆದ. ಮುಖ್ಯವಾಗಿ ಯಾವುದೇ ಮಾನವ ಸಂಘಟನೆಗಳು ಸಮಾಜದ ಮುಖ್ಯವಾಹಿನಿಯಿಂದ ದೂರವಿರದಂತೆ ನೋಡಿಕೊಳ್ಳಬೇಕು. ಈ ತರದ ಹಿಂಸಾತ್ಮಕ ಧೋರಣೆ ತಳೆಯುವ ಪಂಗಡಗಳಿಂದ ರಕ್ಷಣೆ ಸಾಧ್ಯ ಮತ್ತು ಸಮಾಜ ವಿರೋಧಿ ತತ್ವಗಳನ್ನು ಬೇರು ಸಮೇತ ಕಿತ್ತುಹಾಕಬಹುದು. ಆದರೆ ನಮ್ಮ ಸರ್ಕಾರ ಸಮಸ್ಯೆಗಳನ್ನು ಬೆಳೆಯಲು ಆಸ್ಪದ ನೀಡಿ, ಅವು ಹೆಮ್ಮರವಾದ ಮೇಲೆ ಮೂಲೋಚ್ಛಾಟನೆಗೆ ತೊಡಗುತ್ತವೆ. ಇದರಿಂದ ಎರಡೂ ಕಡೆಗೂ ಹಾನಿ ತಪ್ಪಿದ್ದಲ್ಲ. ಆದರೂ ಸಮಾಜ ಇಂಥ ದಿಕ್ಕು ತಪ್ಪಿದ ಸಂಘಟನೆಗಳ ಜೊತೆ ಸದಾ ಜಾಗರೂಕವಾಗಿ ವ್ಯವಹರಿಸಬೇಕಾಗಿದೆ.
ಬಿ. ರಾಮರಾವ
ಗುಲ್ಬರ್ಗಾ
|